ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇತ್ತೀಚೆಗೆ ಅನೈತಿಕ ಸಂಬಂಧಗಳ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದರೊಂದಿಷ್ಟು ಪ್ರಕರಣಗಳು ಇಂತಹದ್ದೇ ಮತ್ತೊಂದು ಭಯಾನಕ ಕೊಲೆ ಪ್ರಕರಣ ಚಿಕ್ಕಬಳ್ಳಾಪುರ ತಾಲ್ಲೂಕಿನ ಮೊಟ್ಲೂರು ಕ್ರಾಸ್ ಬಳಿ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧದ ವೈಮನಸ್ಯ – ಕೊಲೆಗೆ ಕಾರಣ

ಕೃತ್ಯದಲ್ಲಿ ಸಾವಿಗೀಡಾದ ವ್ಯಕ್ತಿಯನ್ನು ಗೌಚೇನಹಳ್ಳಿಯ 35 ವರ್ಷದ ಸುಭಾಷ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸುಭಾಷ್ ತನ್ನ ಬಾವಮೈದನ (ಆರೋಪಿ) ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಸಂಬಂಧಕ್ಕಾಗಿ ಬಾಮೈದ ನನ ಪತ್ನಿಗೆ ಸುಭಾಷ್ ನಿರಂತರ ಕಿರುಕುಳ ನೀಡುತ್ತಿದ್ದಂತೆ ಆರೋಪಿಗಳ ಹೇಳಿಕೆಯಿದೆ. ಈ ದ್ವೇಷದಿಂದ ಮನೋಜ್ (ಮುಖ್ಯ ಆರೋಪಿ) ತನ್ನ ಸ್ನೇಹಿತರನ್ನು ಒಳಗೊಳ್ಳುವ ಮೂಲಕ ಸುತ್ತುಹಾಕಿ ಕೊಲೆ ನಡೆಸಿದ್ದಾನೆ.

ನಿಷ್ಪಾಪ ಭಾವನೆಗೆ ನುಗ್ಗಿದ ಕ್ರೌರ್ಯ

ಘಟನೆಯ ದಿನ, ಸುಭಾಷ್ ಒಂಟಿಯಾಗಿ ರಸ್ತೆಯಲ್ಲಿ ನಡೆಯುತ್ತಿದ್ದಾಗ, ಮನೋಜ್ ಹಾಗೂ ನಾಲ್ಕೈದು ಸ್ನೇಹಿತರು ಅವನನ್ನು ಹಿಂಬಾಲಿಸಿದರು. ಕೊನೆಗೆ, ತಪ್ಪಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ, ಅಡ್ಡಗಟ್ಟಿ ಮೊದಲು ಹಲ್ಲೆ ನಡೆಸಿದರು. ತದನಂತರ ಮಚ್ಚು ಮತ್ತು ದೊಡ್ಡ ಕಲ್ಲುಗಳಿಂದ ಹಲ್ಲೆ ನಡೆಸಿ, ತೀವ್ರವಾಗಿ ಗಾಯಗೊಳಿಸಿ ಕೊಲೆ ಮಾಡಿದರು. ಕೊನೆಯಾಗಿ, ಪತ್ತೆ ಬೀಳದಂತೆ ಮಾಡಬೇಕೆಂಬ ಉದ್ದೇಶದಿಂದ ಮೃತದೇಹವನ್ನು ನೀರು ಹರಿಯುವ ಕಾಲುವೆಗೆ ಎಸೆದಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು

ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಲ್ ಚೌಕ್ಸೆ, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಮುಖ ಆರೋಪಿ ಮನೋಜ್ ಅನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ. ಇದಲ್ಲದೆ, ಘಟನೆಯಲ್ಲಿ ಭಾಗಿಯಾದ ಇನ್ನೂ ನಾಲ್ಕೈದು ಜನ ಆರೋಪಿ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪೊಲೀಸರ ಹರಸಾಹಸ – ಶೀಘ್ರವೇ ಬಂಧನ ನಿರೀಕ್ಷೆ

ಅನೈತಿಕ ಸಂಬಂಧದ ದ್ವೇಷವು ಮತ್ತೊಂದು ಜೀವ ತೆಗೆದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಪರಾರಿಯಾದ ಆರೋಪಿಗಳನ್ನು ಪತ್ತೆ ಹಚ್ಚಲು ಗಂಭೀರ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಿ ಕಾನೂನು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಇನ್ನು ಮುಂದೆ ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ. ವರದಿ: ಸುಬ್ರಹ್ಮಣ್ಯಂ

Related News

error: Content is protected !!