ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬೆಲ್ಲಾ ಗುಂಡಿಗಳುದೆ ದರ್ಶನವಾಗುತ್ತದೆ .ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ನಿಂತಿರುವುದು ವಾಹನ ಸವಾರರಿಗೆ ವಾಹನ ಹೇಗೆ ಚಲಾಯಿಬೇಕು ಅನ್ನುವುದು ದಿಕ್ಕು ತೋಚದೆ ಕೆಸರಲ್ಲಿ ಚಲಾಯಿಸುಕೊಂಡು ತೆರಳುತ್ತಿದ್ದಾರೆ.

ಹೌದು.. ಕುಂದಗೋಳ ತಾಲೂಕಿನ ಶಿರೂರು ಮಾರ್ಗವಾಗಿ ಕಮಡೊಳ್ಳಿ ಗ್ರಾಮಕ್ಕೆ ತೆರಳಬೇಕಂದರೆ ವಾಹನ ನಿಯಂತ್ರಣದಲ್ಲಿ ಇರಬೇಕು ಅಲ್ಪ ಸ್ವಲ್ಪ ಯಾಮಾರಿದರೆ ತೆಗ್ಗು ಗುಂಡಿಯಲ್ಲಿ ಬಿದ್ದು, ಮೈಯೆಲ್ಲಾ ಕೆಸರು ಬಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ಅಷ್ಟಕ್ಕೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರೂರು, ಇಲ್ಲಿಯ ಪರಿಸ್ಥಿತಿ ಹೀಗ ಇದೆ ಅಂದರೆ ಬೇರೆ ಗ್ರಾಮ ಯಾವಾ ಲೆಕ್ಕ? ಜನಪ್ರತಿನಿಧಿಗಳು ಗ್ರಾಮಕ್ಕೆ ಬೆಲೆ ಇಲ್ಲಂದಗೆ ಮಾಡಿದ್ದಾರೆ. ಈ ರಸ್ತೆ ತುಂಬ ತೆಗ್ಗು ದಿನ್ನಿಯಿಂದ ಆವೃತಗೊಂಡಿದ್ದರು ಅಧಿಕಾರಿಗಳು ತೆಪ್ಪೆ ಹಚ್ಚವು ಕೆಲಸ ಕೊಡ ಮಾಡಿಲ್ಲ.

ಇನ್ನೂ ಇಲ್ಲಿನ ಸಾರ್ವಜನಿಕರು ಬೇರಡೆ ಪಲಾಯನ ಮಾಡಬೇಕಾದರೆ ಈ ರಸ್ತೆಯಲ್ಲಿ ಓಡಾಡಬೇಕು, ಹೀಗಾಗಿ ಪ್ರಮುಖ ರಸ್ತೆಯನ್ನೆ ಅವಲಂಬಿತ ಜನ ಅಧಿಕಾರಿಗಳಿಗೆ ಚಿಮಾರಿ ಹಾಕುತ್ತಿದ್ದಾರೆ. ಕುಂದಗೋಳ ಪಟ್ಟಣಕ್ಕೆ ತೆರೆಳಬೇಕಾದ ರಸ್ತೆ ಎದ್ದು ಬಿದ್ದು ಹೋಗಬೇಕು ನಮ್ಮ ಕಷ್ಟ ಆಲಿಸುವರು ಯಾರು ಅಂತ ಅಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ.

ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಕುಂದಗೋಳ ಇಲಾಖೆಯ ಅಡಿಯಲ್ಲಿ 25 ಲಕ್ಷ ರೂಪಾಯಿ ಹಣವನ್ನು ರಸ್ತೆ ಸುಧಾರಣೆಗೆ ತೆಗದು ಇಡಲಾಗಿದೆ ಸದ್ಯ ಆ ರಸ್ತೆ ಸುಧಾರಣೆ ಆಗಿಲ್ಲ.

ವರದಿ: ಶಾನು ಯಲಿಗಾರ

Related News

error: Content is protected !!