ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಸೆಲ್ ಸುತ್ತಮುತ್ತಲಿದ್ದ ಖ್ಯಾತಿ ಪಡೆದ ರೌಡಿಶೀಟರ್‌ಗಳನ್ನು ಬೇರೆ ಸೆಲ್‌ಗಳಿಗೆ ಸ್ಥಳಾಂತರಿಸುವ ಮೂಲಕ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

ಮುಂಬೈದಲೇ ಜೈಲಿನೊಳಗೆ ನಡೆದ ಘಟನೆಗಳು ಹಾಗೂ ದರ್ಶನ್ ಮತ್ತು ರೌಡಿಶೀಟರ್‌ಗಳ ಫೋಟೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಗೊಂಡಿದ್ದಾರೆ. ದರ್ಶನ್‌ನ ಸೆಲ್‌ಗೆ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಅವನಿಗೆ ಹತ್ತಿರದ ಸೆಲ್‌ಗಳಲ್ಲಿ ಇತರ ಆರೋಪಿಗಳನ್ನು ಇರಿಸದಂತೆ ತೀರ್ಮಾನಿಸಲಾಗಿದೆ. ಅಲ್ಲದೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ನಿಗಾವನ್ನು ಹೆಚ್ಚಿಸಲಾಗಿದೆ.

ಇದಕ್ಕೂ ಮುನ್ನ ವಿಲ್ಸನ್ ಗಾರ್ಡನ್‌ನ ಪ್ರಸಿದ್ಧ ರೌಡಿಶೀಟರ್ ನಾಗನೊಂದಿಗೆ ದರ್ಶನ್ ಕುಳಿತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಲಾನ್‌ನಲ್ಲಿ ಕುಳಿತು ಕಾಫಿ ಕುಡಿಯುತ್ತಿರುವ ಹಾಗೂ ಹರಟೆ ಹೊಡೆಯುತ್ತಿರುವ ಆ ದೃಶ್ಯಗಳು ವೈರಲ್ ಆದ ನಂತರ, ಸುಪ್ರೀಂ ಕೋರ್ಟ್‌ ಕೂಡಾ ಎಚ್ಚರಿಕೆ ನೀಡಿತ್ತು.

ಅದರ ಬೆನ್ನಲ್ಲೇ ಜೈಲು ಆಡಳಿತ ಕಠಿಣ ನಿಬಂಧನೆ ಜಾರಿಗೆ ತಂದಿದ್ದು, ದರ್ಶನ್ ಹತ್ತಿರ ಯಾವುದೇ ಬಗೆಯ ಪ್ರಭಾವಶಾಲಿ ಅಥವಾ ನಟೋರಿಯಸ್ ಆರೋಪಿಗಳನ್ನು ಇರಿಸದಂತೆ ಕ್ರಮ ಕೈಗೊಂಡಿದೆ. ಜೈಲು ಒಳಗಿನ ಯಾವುದೇ ಅಸಮಂಜಸ ಘಟನೆಗಳನ್ನು ತಪ್ಪಿಸಲು ಪೊಲೀಸರು 24 ಗಂಟೆಗಳ ನಿಗಾವನ್ನು ಮುಂದುವರಿಸಿದ್ದಾರೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

error: Content is protected !!