ಬಳ್ಳಾರಿ: ಪ್ರೀತಿಯಲ್ಲಿ ಮೋಸಕ್ಕೊಳಗಾದ ಯುವತಿ ನ್ಯಾಯಕ್ಕಾಗಿ ಹಗಲು-ರಾತ್ರಿ ಎನ್ನದೆ ಪ್ರೇಮಿಯ ಮನೆಯ ಮುಂದೆ ಧರಣಿ ಕುಳಿತಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

ಮಾಹಿತಿಯಂತೆ, ಬಳ್ಳಾರಿ ತಾಲೂಕಿನ ಹೊಸ ನೆಲ್ಲುಡಿ ಗ್ರಾಮದ ನಂದೀಶ್ ಹಾಗೂ ಕೊಟ್ಟಾಲ್ ಗ್ರಾಮದ ಯುವತಿ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯ ಭರವಸೆ ನೀಡಿದ್ದ ನಂದೀಶ್ ಇತ್ತೀಚೆಗೆ ಯುವತಿಯನ್ನು ಹಾಸನದಿಂದ ಕರೆದುಕೊಂಡು ಬಂದು, ಕಂಪ್ಲಿಯಲ್ಲಿ ಒಂದು ದಿನ ತಿರುಗಾಡಿಸಿದ್ದಾನೆ. ಆದರೆ ಮನೆಯವರಿಂದ ಫೋನ್ ಬಂದ ತಕ್ಷಣ ಅವಳನ್ನು ಬಿಟ್ಟು ಹೋಗಿದ್ದಾನೆ.

ಯುವತಿಯ ಆರೋಪ ಪ್ರಕಾರ, ನಂದೀಶ್ ಮನೆಮಂದಿ ಅವರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕಾರಣವಾಗಿ ಜಾತಿ ಅಡ್ಡಿಯನ್ನು ಹೇಳಿದ್ದಾರೆ. ಯುವತಿ ಭೋವಿ (ಎಸ್ಸಿ) ಸಮಾಜಕ್ಕೆ ಸೇರಿದ್ದರೆ, ನಂದೀಶ್ ಲಿಂಗಾಯತ ಜಂಗಮ ಸಮಾಜಕ್ಕೆ ಸೇರಿದವನು. ಪ್ರೀತಿ ಮಾಡುವಾಗ ಜಾತಿ ಸಮಸ್ಯೆಯಾಗಿರಲಿಲ್ಲವಾದರೂ, ಮದುವೆಯ ವಿಚಾರ ಬಂದಾಗ ವಿರೋಧ ಶುರುವಾಗಿದೆ.

ಘಟನೆಯ ನಂತರ ನಂದೀಶ್ ಕುಟುಂಬ ಮನೆಗೆ ಬೀಗ ಹಾಕಿ ಪಲಾಯನ ಮಾಡಿದೆ. “ಮದುವೆ ಮಾಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ನ್ಯಾಯ ಸಿಗುವವರೆಗೆ ಹಿಂಜರಿಯುವುದಿಲ್ಲ,” ಎಂದು ಯುವತಿ ಎಚ್ಚರಿಕೆ ನೀಡಿದ್ದಾರೆ. ಈ ಪ್ರತಿಭಟನೆಯ ಹಿನ್ನೆಲೆ, ಗ್ರಾಮದ ಜನರು ಮತ್ತು ಸ್ಥಳೀಯರು ಕೂಡ ಘಟನೆಗೆ ಗಮನ ಹರಿಸಿದ್ದು, ಪೊಲೀಸ್ ಇಲಾಖೆ ಪರಿಸ್ಥಿತಿ ಶಾಂತವಾಗಿಡಲು ನಿಗಾವಹಿಸಿದೆ.

Related News

error: Content is protected !!