ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಸಂಭವಿಸಿದ ಒಂದು ಮರ್ಮವಿದ್ರಾವಕ ಘಟನೆ, ಮನುಷ್ಯತ್ವದ ಅರಿವು ಮೂಡಿಸಬೇಕಾದ ಅಗತ್ಯವನ್ನು ಮತ್ತೆ ಒಂದು ಬಾರಿ ನೆನಪಿಸಿದೆ. ಮೇ 31, 2025ರಂದು ಶಿಡ್ಲಘಟ್ಟದ ರೈಲ್ವೆ ನಿಲ್ದಾಣದ ಹತ್ತಿರ, 30 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮೃತಳನ್ನು ಜಂಗಮಕೋಟೆ ಗ್ರಾಮದ ರೇಣುಕಾ ಎಂದು ಗುರುತಿಸಲಾಗಿದೆ.

ಅದರಲ್ಲೂ ಆಕೆ 8 ತಿಂಗಳ ಗರ್ಭಿಣಿಯಾಗಿದ್ದನ್ನು ಕಂಡು, ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮೂಡಿದೆ. ದಿಕ್ಕು ತೋಚದೇ ಬೀದಿಗಳಲ್ಲಿ ಅಲೆದಾಡುತ್ತಿದ್ದ ಈಕೆಯು, ದುಷ್ಕರ್ಮಿಗಳ ದೈಹಿಕ ದುರ್ಬಳಕೆಗೆ ಬಲಿಯಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಸಮಾಜದ ಅಂಚಿನಲ್ಲಿ ಬದುಕುತ್ತಿದ್ದ, ಯಾರಿಗೂ ಕಾಣಿಸದ ರೇಣುಕಾಳ ದಾರುಣ ಅಂತ್ಯವು ಈ ಜಾಗೃತಿಗೆ ಕರೆಗೆಳಿಸುತ್ತಿದೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಶಿಡ್ಲಘಟ್ಟದ ಪಿಎಸ್‌ಐ ವೇಣುಗೋಪಾಲ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕೇವಲ ಕರ್ತವ್ಯಕ್ಕೆ ಸೀಮಿತವಾಗದೇ, ಅವರು ಮರಣೋತ್ತರ ಸಂಸ್ಕಾರ ಕಾರ್ಯಕ್ಕಾಗಿ ವೈಯಕ್ತಿಕವಾಗಿ ಹಣ ಒದಗಿಸಿ ಮಾನವೀಯತೆ ಮೆರೆದಿದ್ದಾರೆ. ಅವರ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Related News

error: Content is protected !!