Latest

36 ವರ್ಷದ ಆಂಟಿ ಮತ್ತು 27 ವರ್ಷದ ವೈದ್ಯ: ಲೈಂಗಿಕ ದೌರ್ಜನ್ಯ, ಒಬ್ಬರಮೇಲೊಬ್ಬರ ಆರೋಪ!

ರಾಮನಗರ: 36 ವರ್ಷದ ಮಹಿಳೆ ಮತ್ತು 27 ವರ್ಷದ ವೈದ್ಯನ ನಡುವೆ ಲೈಂಗಿಕ ದೌರ್ಜನ್ಯ ಆರೋಪ, ಪ್ರಕರಣ ಗಂಭೀರ ತಿರುವು. ರಾಮನಗರದಲ್ಲಿ 36 ವರ್ಷದ ಮಹಿಳೆ ಮತ್ತು 27 ವರ್ಷದ ಯುವ ವೈದ್ಯನ ನಡುವೆ ನಡೆದ ಘಟನೆಯು ವಿವಾದಕ್ಕೆ ಕಾರಣವಾಗಿದೆ. ಮಹಿಳೆ ಯುವ ವೈದ್ಯನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರೆ, ವೈದ್ಯನು ತನ್ನ ವಿರುದ್ಧ ಆಕೆಯೇ ಅಸಭ್ಯವಾಗಿ ವರ್ತಿಸಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯ ಹಿನ್ನೆಲೆ:
ಮಹಿಳೆ, ಇವೆಂಟ್ ಮ್ಯಾನೇಜ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ 9 ಗಂಟೆ ವೇಳೆಗೆ ಸಂಬಂಧಿಕರ ಮನೆಗೆ ಹೋಗಲು ಬಸ್ ನಿರೀಕ್ಷಿಸುತ್ತಿದ್ದರು. ಬಸ್ ಸಿಗದ ಕಾರಣ, 27 ವರ್ಷದ ವೈದ್ಯನನ್ನು ತಡೆದು ಡ್ರಾಪ್ ಕೋರಿದ್ದಾರೆ. ಮಹಿಳೆ ನನಗೆ ಕುಂಬಳಗೋಡು ಬಿಡಿ ಎಂದು ಹೇಳಿದ್ದಾಳೆ. ಈ ವೇಳೆ ಕೆಂಗೇರಿ ಕಡೆ ಹೋಗ್ತಾ ಇದೀರಾ, ಹಾಗಾದ್ರೆ ಕೆಂಗೇರಿಯೇ ಬಿಟ್ಟುಬಿಡಿ ಎಂದು ಮಹಿಳೆ ಹೇಳಿದ್ದಾಳಂತೆ.‌

ಮಧ್ಯದ ಸಮಯದಲ್ಲಿ, ವೈದ್ಯನು ಪಥ ಬದಲಿಸಿ ಕತ್ತಲಿರುವ ಖಾಲಿ ಲೇಔಟ್‌ಗೆ ತೆರಳಿ, ಅಸಭ್ಯವಾಗಿ ವರ್ತಿಸಿದ್ದಾನೆಂದು ಮಹಿಳೆ ಆರೋಪ ಮಾಡಿದ್ದಾರೆ. ವೈದ್ಯನು ಡ್ರೆಸ್ ತೆಗೆಯಲು ಹೇಳಿದ್ದು, ತನ್ನ ಪ್ಯಾಂಟ್ ಬಿಚ್ಚಿ ಆಕೆಯೊಂದಿಗೆ ಅನಾಚಾರಕ್ಕೆ ಮುಂದಾಗಿದ್ದಾನೆ. ಈ ಸಂದರ್ಭ ಮಹಿಳೆ ಜೋರಾಗಿ ಕೂಗಿ, ಸ್ಥಳದಿಂದ ಓಡಿಹೋಗಿ ಮತ್ತೊಬ್ಬ ಬೈಕ್ ಸವಾರನ ನೆರವಿನಿಂದ ಕುಂಬಳಗೋಡಿಗೆ ತಲುಪಿದ್ದಾರೆ.

ವೈದ್ಯನ ಪ್ರತಿಸ್ಪಂದನೆ:
ಆರೋಪವನ್ನು ನಿರಾಕರಿಸಿದ ವೈದ್ಯನು, ಮಹಿಳೆಯೇ ನನ್ನ ಮೇಲೆ ಅಸಭ್ಯವಾಗಿ ವರ್ತಿಸಿದ್ದಾಳೆ ಎಂದು ಹೇಳಿದ್ದು, “ನಾನು ಆಕೆಗೆ ಕೇವಲ ಸಹಾಯ ಮಾಡಲು ಮುಂದಾಗಿದ್ದೆ. ನನ್ನೊಡನೆ ಇರುವ ವೇಳೆ ಆಕೆಯೇ ನನ್ನ ಮರ್ಮಾಂಗಕ್ಕೆ ಕೈ ಹಾಕಿದ್ದಾರೆ. ನಾನು ಆ ತರಹ ಮಾಡುವ ವ್ಯಕ್ತಿಯಲ್ಲ,” ಎಂದಿದ್ದಾರೆ.

ಪೊಲೀಸರ ತನಿಖೆ:
ಈ ಘಟನೆಯು ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇಬ್ಬರಲ್ಲೂ ಪರಸ್ಪರ ವಿರುದ್ಧವಾದ ಆರೋಪಗಳನ್ನು ಮಾಡಿರುವ ಕಾರಣ, ಸತ್ಯಾಂಶವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಪ್ರಕರಣವು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದ್ದು, ಪುರುಷರ ಮತ್ತು ಮಹಿಳೆಯರ ಭದ್ರತೆಯ ಕುರಿತು ಮಹತ್ವದ ಪ್ರಶ್ನೆಗಳನ್ನು ಎಬ್ಬಿಸಿದೆ.

ಭ್ರಷ್ಟರ ಬೇಟೆ

Recent Posts

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

16 hours ago

ಮೈಸೂರಿನಲ್ಲಿ ಐಷಾರಾಮಿ ಕಾರುಗಳ ಮೇಲೆ ಆರ್‌ಟಿಒ ದಾಳಿ: ₹3 ಕೋಟಿ ದಂಡ, ₹15 ಕೋಟಿ ಮೌಲ್ಯದ ವಾಹನ ವಶ

ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು…

17 hours ago

ಕೆ.ಆರ್.ಪೇಟೆ: ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ ವ್ಯಕ್ತಿ ಬಂಧನ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ…

17 hours ago

ರ್‍ಯಾಶ್ ಡ್ರೈವಿಂಗ್ ಪ್ರಶ್ನಿಸಿದ ಮಹಿಳೆಗೆ ರ‍್ಯಾಪಿಡೋ ಬೈಕ್ ಚಾಲಕನಿಂದ ಹಲ್ಲೆ: ಪ್ರಕರಣ ದಾಖಲು

ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ‍್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನಿಂದ ಮಹಿಳೆಯ…

19 hours ago

ಪುತ್ತೂರಿನಲ್ಲಿ ಆತ್ಮಹತ್ಯೆ ಆಘಾತ: ಏಳು ತಿಂಗಳ ಗರ್ಭಿಣಿ ನೇಣುಬಿಗಿದುಕೊಂಡು ಜೀವವಿಡುವ ದುರ್ಘಟನೆ

ಪುತ್ತೂರು, ಜೂನ್ 16 – ಪುತ್ತೂರು ಹೊರವಲಯದ ಚಿಕ್ಕಪುತ್ತೂರಿನಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ…

20 hours ago

ಕೋಲಾರ್ ಎಸ್‌ಬಿಐ ಎಟಿಎಂ ದರೋಡೆ: ಕಳ್ಳರು ₹27 ಲಕ್ಷ ನಗದು ದೋಚಿ ಪರಾರಿ.!

ಕೋಲಾರ್ (ಜೂನ್ 16): ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ…

23 hours ago