ಒಡಿಶಾದಲ್ಲಿ ಬೆಳಕಿಗೆ ಬಂದಿರುವ ಪ್ರಕರಣ ಒಂದು ಬೆಚ್ಚಿ ಬೀಳಿಸುವಂತಿದೆ. ಹಣ ಗಳಿಕೆಗಾಗಿ ತನ್ನ ಪತಿಯೊಂದಿಗೆ ಸೇರಿ ಹನಿ ಟ್ರಾಪ್ ದಂಧೆಗಿಳಿದ ಮಹಿಳೆಯೊಬ್ಬಳು ಇದರಿಂದಲೇ ಬರೋಬ್ಬರಿ ಬರಿ 30 ಕೋಟಿ ರೂಪಾಯಿ ಸಂಪಾದಿಸಿದ್ದಾಳೆ. ಅಷ್ಟೇ ಅಲ್ಲ, ಕೋಟಿಗಟ್ಟಲೆ ಬೆಲೆ ಬಾಳುವ ಐಷಾರಾಮಿ ಕಾರುಗಳು, ಕುದುರೆ, ವಿದೇಶಿ ತಳಿಯ ನಾಯಿಗಳು ಈಕೆಯ ಸಂಪಾದನೆ ಪಟ್ಟಿಯಲ್ಲಿವೆ.
ಅರ್ಚನಾ ನಾಗ್ ಎಂಬ 26 ವರ್ಷದ ಮಹಿಳೆ ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ವಿಚಾರಣೆ ವೇಳೆ ಆಕೆ ಬಾಯಿ ಬಿಡುತ್ತಿರುವ ಸಂಗತಿಗಳು ಸ್ವತಃ ಪೊಲೀಸರನ್ನೇ ದಂಗಾಗುವಂತೆ ಮಾಡಿದೆ. ಚಿತ್ರ ನಿರ್ಮಾಪಕರು, ಬಿಲ್ಡರ್ ಗಳು, ರಾಜಕಾರಣಿಗಳು, ಉದ್ಯಮಿಗಳು ಅಷ್ಟೇ ಯಾಕೆ ಹಲವು ಪೊಲೀಸ್ ಅಧಿಕಾರಿಗಳೇ ಈಕೆಯ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ. ಆದರೆ ಮರ್ಯಾದೆಗೆ ಅಂಜಿ ಯಾರೂ ಕೂಡ ಈವರೆಗೆ ದೂರು ನೀಡದ ಕಾರಣ ದಂಪತಿಯ ವಂಚನಾ ಕಾರ್ಯ ನಿರಂತರವಾಗಿ ಮುಂದುವರೆದಿತ್ತು. ಕಡೆಗೂ ನಿರ್ಮಾಪಕರೊಬ್ಬರು ಸುಲಿಗೆ ದೂರು ನೀಡಿದ ಬಳಿಕ ದಂಪತಿಯ ವಂಚನೆ ಬೆಳಕಿಗೆ ಬಂದಿದೆ.
ಅರ್ಚನಾ ನಾಗ್ ಪತಿ ಜಗಬಂಧು ಚಾಂದ್ ಎಂಬಾತ ಸೆಕೆಂಡ್ ಹ್ಯಾಂಡ್ ಕಾರುಗಳ ಡೀಲರ್ ಆಗಿದ್ದು, ಹೀಗಾಗಿ ಗಣ್ಯ ವ್ಯಕ್ತಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದ. ನಂತರ ಅವರುಗಳೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಿದ್ದ ಅರ್ಚನಾ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳನ್ನು ಸೆರೆಹಿಡಿಯುತ್ತಿದ್ದು ಇಬ್ಬರೂ ಸೇರಿ ದೊಡ್ಡಮಟ್ಟದ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಈ ವಿಡಿಯೋ, ಫೋಟೋ ಬಯಲಾದರೆ ಸಮಾಜದಲ್ಲಿ ತಾವು ತಲೆಯೆತ್ತಿ ತಿರುಗಲು ಸಾಧ್ಯವಾಗುವುದಿಲ್ಲ ಎಂದು ಅಂಜುತ್ತಿದ್ದ ಗಣ್ಯ ವ್ಯಕ್ತಿಗಳು, ದಂಪತಿ ಕೇಳಿದಷ್ಟು ಹಣ ನೀಡಿ ಕೈ ತೊಳೆದುಕೊಳ್ಳುತ್ತಿದ್ದರು. ಇದೀಗ ಆರೋಪಿ ದಂಪತಿಗಳು ಕಂಬಿ ಹಿಂದೆ ಸೇರಿದ್ದಾರೆ.
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…