ಬೆಂಗಳೂರು ನಗರದ ಹೃದಯಭಾಗವಾದ ಟಾಸ್ಕರ್ಟೌನ್ ಪ್ರದೇಶದ ಹೋಟೆಲ್ವೊಂದರಲ್ಲಿ ನಕಲಿ ನೋಟು ಮುದ್ರಣೆ ನಡೆಸುತ್ತಿದ್ದ 23 ವರ್ಷದ ಯುವಕನೊಬ್ಬನನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಉದ್ಯಮಿಯ ಪುತ್ರನಾಗಿರುವ ಕ್ರಿಷ್ ಮಾಲಿ ಎನ್ನಲಾಗಿದೆ.
ಮನೆನಲ್ಲಿ ಜಗಳ ನಡೆದ ಹಿನ್ನೆಲೆಯಲ್ಲಿ ಮನವಿರಸಿನಿಂದ ಹೊರಬಂದಿದ್ದ ಕ್ರಿಷ್, ಜೂನ್ 1ರಂದು ಆನ್ಲೈನ್ ಮೂಲಕ ಟಾಸ್ಕರ್ಟೌನ್ನಲ್ಲಿರುವ ಹೋಟೆಲ್ವೊಂದರಲ್ಲಿ ರೂಂ ಬುಕ್ ಮಾಡಿದ್ದ. ಅಲ್ಲೇ ತಂಗಿ ಮುಂದಿನ ದಿನಗಳಲ್ಲಿ ತನ್ನ ಖರ್ಚುಗಳನ್ನು ನಿರ್ವಹಿಸಲು ಏನು ಮಾಡುವುದು ಎಂಬ ಸಂಕಟದಲ್ಲಿದ್ದ ಆತ, ಖೋಟಾ ನೋಟು ಮುದ್ರಣೆಯ ಯೋಜನೆ ರೂಪಿಸುತ್ತಾನೆ.
ಆಂದಾಜು ಕಾರ್ಯಚಟುವಟಿಕೆಗೆ ಬೇಕಾದ ಪ್ರಿಂಟರ್ ಮತ್ತು ಸ್ಕ್ಯಾನರ್ ಖರೀದಿಸಿ, ಹೋಟೆಲ್ ರೂಮಿಗೆ ತರಿಸಿಕೊಂಡಿದ್ದ. ನಂತರ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮೂಲಕ ತಯಾರಿಸುತ್ತಿದ್ದ. ಜೂನ್ 7ರಂದು ಹೋಟೆಲ್ನಿಂದ ಚೆಕ್ಔಟ್ ಆದ ಕ್ರಿಷ್, ಅಂತಿಮವಾಗಿ ಹೋಟೆಲ್ಗೆ 3 ಸಾವಿರ ರೂ. ನಕಲಿ ನೋಟುಗಳನ್ನೇ ಪಾವತಿಸಿದ್ದ.
ಪ್ರಾರಂಭದಲ್ಲಿ ಹೋಟೆಲ್ ಸಿಬ್ಬಂದಿ ಈ ನೋಟುಗಳನ್ನು ಅಸಲೀ ಎನ್ನುತ್ತಿದ್ದರು. ಆದರೆ ಆತ ತಂಗಿದ್ದ ರೂಮನ್ನು ಸ್ವಚ್ಛಗೊಳಿಸುತ್ತಿದ್ದಾಗ ಪೌರಕಾರ್ಮಿಕರು ತ್ಯಾಜ್ಯದೊಂದಿಗೆ ನಕಲಿ ನೋಟುಗಳು ಕಂಡುಬಂದುದನ್ನು ಗಮನಿಸಿದರು. ಈ ವಿಚಾರವನ್ನು ಮ್ಯಾನೇಜರ್ ಗಮನಕ್ಕೆ ತಂದಾಗ ಅವರು ತಕ್ಷಣ ನೋಟುಗಳನ್ನು ಪರಿಶೀಲಿಸಿದರು.
ಪರಿಶೀಲನೆಯ ಸಂದರ್ಭದಲ್ಲಿ ನೋಟುಗಳು ನಕಲಿತನ ಹೊಂದಿದ್ದವು ಎಂಬುದು ಖಚಿತವಾಯಿತು. ಕೂಡಲೇ ಹೋಟೆಲ್ ಮ್ಯಾನೇಜರ್ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ಸಲ್ಲಿಸಿದರು. ಪೊಲೀಸರು ತಕ್ಷಣ ಪ್ರಕರಣವನ್ನು ಗಂಭೀರವಾಗಿ ಕೈಗೊಂಡು ತನಿಖೆ ಆರಂಭಿಸಿದರು.
ಕ್ರಿಷ್ ಮಾಲಿಯ ಹೋಟೆಲ್ ರೂಮ್ ಪರಿಶೀಲನೆಯ ವೇಳೆ ನಕಲಿ ನೋಟುಗಳ ತುಂಡುಗಳು, ಬಿಳಿ ಕಾಗದದ ಬಂಡಲ್ ಮತ್ತು ಮುದ್ರಣಕ್ಕೆ ಬಳಸಿದ ಸಾಧನಗಳು ಸಿಕ್ಕಿವೆ. ಇದೀಗ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ನಕಲಿ ನೋಟು ಮುದ್ರಣದ ಹಿಂದೆ ಇರುವ ಇನ್ನಿತರ ಸಂದರ್ಭಗಳು ಹಾಗೂ ತಂತ್ರಜ್ಞಾನ ಬಳಕೆಯ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕ ಹೈಕೋರ್ಟ್ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…
ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…
ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…
ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…
ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…
ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…