Latest

ಆಂಟಿಯ ಹನಿ ಟ್ರಾಪ್‌ಗೆ ಸಿಲುಕಿ 2.90 ಲಕ್ಷ ರೂ. ಸಂಬಳದ ಕೆಲಸದ ಜೊತೆ 20 ಲಕ್ಷ ಕಳೆದುಕೊಂಡ!

ರವಿ ಜಯರಾಮ್‌ ಎಂಬುವರೇ ಹನಿ ಟ್ರ್ಯಾಪ್‌ನಲ್ಲಿ ಸಿಲುಕಿ ಉದ್ಯೋಗ ಕಳೆದುಕೊಂಡಿರುವ ವ್ಯಕ್ತಿ. ಪಾರ್ಟಿಯಲ್ಲಿ ಭವಾನಿ ಅವರನ್ನು ರವಿ ಜಯರಾಮ್ ಭೇಟಿಯಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿತ್ತು. ಮಹಿಳೆಗೆ ಹಣ ಸಹಾಯವನ್ನು ರವಿ ಮಾಡಿದ್ದರು. ಭವಾನಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದರು. ಒಟ್ಟಿಗೆ ಹತ್ತಾರು ಬಾರಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದರು. ಬಳಿಕ ಖಾಸಗಿ ವಿಡಿಯೋಗಳನ್ನು ಸೆರೆಹಿಡಿಯಲಾಗಿತು.
ನಂತರದ ದಿನಗಳಲ್ಲಿ ಭವಾನಿಯ ಅಸಲಿ ಮುಖವಾಡ ಬೆಳಕಿಗೆ ಬಂದಿದೆ. ಬ್ಲಾಕ್ ಮೇಲ್ ಮಾಡಲು ಭವಾನಿ ಗ್ಯಾಂಗ್‌ ಶುರು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಲಾಗಿತು.
ನಿರಾಕರಿಸಿದಾಗ ದೂರುದಾರನ ಪತ್ನಿಗೂ ತಾವಿಬ್ಬರೇ ಇರುವ ಖಾಸಗಿ ವಿಡಿಯೋ ಫೊಟೋಗಳನ್ನು ಭವಾನಿ ಸೆಂಡ್ ಮಾಡಿದ್ದಳು. ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡೋದಾಗಿ ಬೆದರಿಕೆ ಹಾಕಿದ್ದಳು. ಈ ಹಿನ್ನಲೆಯಲ್ಲಿ ಹಂತ ಹಂತವಾಗಿ 20 ಲಕ್ಷ ರೂ.ಗಳನ್ನು ರವಿ ಜಯರಾಮ್ ನೀಡಿದ್ದ. ಭವಾನಿಗೆ ಸ್ವತಃ ಆಕೆಯ ತಾಯಿ, ತಮ್ಮ, ತಂಗಿ ಸೇರಿ ಇಡೀ ಕುಟುಂಬ ಸಾಥ್‌ ನೀಡಿತ್ತು.
ದೂರಿನಲ್ಲಿ ಇಡಿ ಕುಟುಂಬದ ಹೆಸರನ್ನ ರವಿ ಜಯರಾಮ್ ದಾಖಲಿಸಿದ್ದಾರೆ. ನಂತರ ಆಕೆಗೆ ಈಗಾಗಲೆ ಎರಡು ಮದುವೆ ಆಗಿರುವ ವಿಚಾರ ಗೊತ್ತಾಗಿದೆ. ಒಂದು ಡಿವೋರ್ಸ್ ಆಗಿದ್ದು ಮತ್ತೊಂದು ಡಿವೋರ್ಸ್ ಪ್ರಕರಣ ನ್ಯಾಯಾಲಯದಲ್ಲಿದೆ.
ರವಿ ಜಯರಾಮ್‌ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಬಳಿ ಕೂಡ ಭವಾನಿ ಬಂದು ಗಲಾಟೆ ಮಾಡಿದ್ದರಿಂದ, ಕಂಪನಿ ಆತನನ್ನು ಉದ್ಯೋಗದಿಂದ ವಜಾಗೊಳಿಸಿತ್ತು. ಕೊನೆಗೆ ಈಕೆ ವಿರುದ್ಧ ಜಯರಾಮ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈಕೆಯನ್ನು ಕರೆಸಿದಾಗ
ದೂರು ದಾಖಲಾದರೆ ಡಿಸಿಪಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಆರೋಪಿ ಭವಾನಿ ಬೆದರಿಸಿದ್ದಾರೆ. ಡಿಸಿಪಿ, ಎಸಿಪಿ ಕಚೇರಿ ಮುಂದೆಯೇ ಮಹಿಳೆ ಹೈಡ್ರಾಮಾ ಮಾಡಿದ್ದಳು.
ಇತ್ತ ಕೈತುಂಬ ಕೆಲಸವೂ ಇಲ್ಲದೆ , ಹೆಂಡತಿಯನ್ನೂ ಕಳೆದುಕೊಂಡು ರವಿ ಜಯರಾಮ್ ಅಲೆದಾಡುವ ಪರಿಸ್ಥಿತಿ ಬಂದಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

2 weeks ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago